Hindu Vani
Index
ಸಂಸ್ಕೃತಿ
ಹೆಸರಿನಲ್ಲಿದೆ ಸಂಸ್ಕೃತಿ
ಉಗ್ರಶ್ರವ :
ಪುರಾಣಗಳನ್ನು ಓದುವ ರೋಮಹರ್ಷಣ (ಸೂತ ಮಹರ್ಷಿ)ರ ಮಗ.
ಉಗ್ರಸೇನ :
1) ಕಂಸನ ತಂದೆ, ಯದುವಂಶದ ರಾಜ ಆಹುಕನ ಮಗ, ಕಂಸನ ವಧೆಯ ನಂತರ ಕೃಷ್ಣನು ಉಗ್ರಸೇನನಿಗೆ ಮಥುರೆಯ ಪಟ್ಟವನ್ನು ಕಟ್ಟಿದನು. 2) ಅರ್ಜುನನ ಮೊಮ್ಮಗ ಪರೀಕ್ಷಿತನ ಮಗ ಅಂದರೆ ಜನಮೇಜಯನ ತಮ್ಮನ ಹೆಸರು ಕೂಡಾ ಉಗ್ರಸೇನ. ಉತ್ಕಲ : ಧ್ರುವ ಮತ್ತು ಇಲೆಯರ ಹಿರಿಯ ಮಗ. ಇವನ ತಮ್ಮ ವತ್ಸರ, ಅವನು ಧ್ರುವನ ನಂತರ ರಾಜನಾದ.
ಉತ್ತಮ :
ಉತ್ತಾನಪಾದ ಮತ್ತು ಸುರುಚಿಯರ ಮಗ.
ಉತ್ತರ :
ವಿರಾಟ ರಾಜನ ಮಗ, ಗೋಗ್ರಹಣದ ಯುದ್ಧದಲ್ಲಿ ಬ್ರಹನ್ನಳೆಯನ್ನು ಸಾರಥಿಯನ್ನಾಗಿಸಿ ಯುದ್ಧಕ್ಕೆ ಹೊರಟವನು.
ಉತ್ತರಾ :
ವಿರಾಟ ರಾಜನ ಮಗಳು. ಅಭಿಮನ್ಯುವಿನ ಹೆಂಡತಿ, ಪರೀಕ್ಷಿತನು ಇವರ ಮಗನು.
ಉತ್ತಾನಪಾದ :
ಸ್ವಾಯಂಭುವ ಮನುವಿನ ಕಿರಿಯ ಮಗ, ಈತನಿಗೆ ಸುನೀತಿ ಮತ್ತು ಸುರುಚಿಯರು ಪತ್ನಿಯರು. ಸುನೀತಿಯ ಮಗ ಧ್ರುವ, ಉತ್ತಮನು ಸುರುಚಿಯ ಮಗ.
ಉದಗ್ರ :
ಮಹಿಷಾಸುರನ ಸೇನಾಪತಿ, ಮಹಾಲಕ್ಷ್ಮಿಯು ಇವನನ್ನು ಕೊಂದಳು.
ಉದ್ದಾಲಕ :
ಆಪೋದ ಮುನಿಯ ಮಗನಾದ ದೌಮ್ಯ ಋಷಿಯ ಶಿಷ್ಯ. ಶ್ವೇತಕೇತು ಮತ್ತು ನಚಿಕೇತರು ಈತನ ಮಕ್ಕಳು. ಕಹೋಳ ಮುನಿಯ ಪತ್ನಿ ಸುಜಾತೆಯೂ ಇವನ ಮಗಳು. ಅಷ್ಟಾವಕ್ರನು ಸುಜಾತೆಯ ಮಗ.
ಉದ್ಧವ :
ಶ್ರೀಕೃಷ್ಣನ ಸ್ನೇಹಿತ. ವಸುದೇವನ ತಮ್ಮ ದೇವಭಾಗನ ಮಗ, ಕಂಸನನ್ನು ಕೃಷ್ಣನು ವಧಿಸಿದ ಸಮಾಚಾರವು ಗೋಕುಲಕ್ಕೆ ತಿಳಿದದ್ದು ಉದ್ದವನಿಂದ.
ಉಪದಾನವೀ :
ಮಯಾಸುರನ ಮಗಳು, ಮಂಡೋದರಿಯು ಈಕೆಯ ತಂಗಿ,
ಉಪಪಾಂಡವರು :
ದೌಪದಿಯ ಐವರು ಮಕ್ಕಳು. ಅವರ ಹೆಸರು ಪ್ರತಿವಿಂಧ್ಯ, ಶ್ರುತಸೋಮ, ಶ್ರುತಕೀರ್ತಿ, ಶತಾನೀಕ, ಶ್ರುತಸೇನ, ಮಹಾಭಾರತ ಯುದ್ಧವು ಮುಗಿದ ರಾತ್ರಿ ಶಿಬಿರದಲ್ಲಿ ಮಲಗಿದ ಇವರನ್ನು ಅಶ್ವತ್ಥಾಮನು ಕೊಂದನು.
ಉಪಮನ್ಯು :
ದೌಮ್ಯಋಷಿಯ ಶಿಷ್ಯ, ಗುರುಕುಲದ ಹಸುಗಳನ್ನು ನೋಡಿಕೊಳ್ಳುವ ಕೆಲಸವನ್ನು ಗುರುಗಳು ಆತನಿಗೆ ಕೊಟ್ಟಿದ್ದರು. ಅಶ್ವಿನಿ ದೇವತೆಗಳಿಂದ ತನ್ನ ಕಣ್ಣುಗಳ ದೃಷ್ಟಿಯನ್ನು ಪಡೆದನು.